ಡಿಸೆ೦ಬರ್ 21ರಿಂದ ಮಂಜುನಾಥ ಭಾಗವತರ ಸ್ಮರಣೆ: ಯಕ್ಷೋತ್ಸವ,ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಡಿಸೆ೦ಬರ್ 16 , 2014
|
ಡಿಸೆ೦ಬರ್ 16, 2014
|
ಡಿಸೆ೦ಬರ್ 21ರಿಂದ ಮಂಜುನಾಥ ಭಾಗವತರ ಸ್ಮರಣೆ: ಯಕ್ಷೋತ್ಸವ,ಸನ್ಮಾನ
ಹೊನ್ನಾವರ :
ತಾಲೂಕಿನ ಕಡತೋಕಾದ ಯಕ್ಷರಂಗದ ಆಶ್ರಯದಲ್ಲಿ ಯಕ್ಷಗಾನ ಕಲಾವಿದ ದಿ. ಕಡತೋಕಾ ಮಂಜುನಾಥ ಭಾಗವತರ ಸ್ಮರಣೆ ಅಂಗವಾಗಿ ಕಡತೋಕಾ ಕೃತಿ-ಸ್ಮತಿ ಯಕ್ಷರಂಗೋತ್ಸವ ಡಿ. 21 ರಿಂದ 25 ರ ವರೆಗೆ ಹಳದೀಪುರದ ಶ್ರೀ ಗೋಪಿನಾಥ ಸಭಾಗ್ರಹದಲ್ಲಿ ನಡೆಯಲಿದೆ.
ಯಕ್ಷೋತ್ಸವ, ಪ್ರಶಸ್ತಿ ಪ್ರದಾನ, ಸನ್ಮಾನ ಮತ್ತು ತಾಳಮದ್ದಳೆ ತರಬೇತಿ ಶಿಬಿರ ಈ ಸಂದರ್ಭದಲ್ಲಿ ನಡೆಯಲಿವೆ.
ಡಿ.21ರಂದು ಮಧ್ಯಾಹ್ನ 4. 30ಕ್ಕೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಬಿ ಎ ವಿವೇಕ ರೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಇಡಗುಂಜಿಯ ಧರ್ಮದರ್ಶಿ ಡಾ. ಜಿ ಜಿ ಸಭಾಹಿತ, ಪತ್ರಕರ್ತ ಬಿ ಗಣಪತಿ, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಜಿ ಎಸ್ ಭಟ್ ಮೆಸೂರು, ಹಿರಿಯ ಪತ್ರಕರ್ತ ಎಂ ಕೆ ಭಾಸ್ಕರರಾವ್, ಯಕ್ಷಗಾನ ಕಲಾಪೋಷಕ ಎನ್ ಆರ್ ಹೆಗಡೆ, ಉದ್ಯಮಿ ಮುರಳೀಧರ ಪ್ರಭು, ನ್ಯಾಯವಾದಿ ಎ ಎನ್ ಹೆಗಡೆ ಪಾಲ್ಗೊಳ್ಳುವರು.
ದಿ. ವಿ ಆರ್ ಹೆಗಡೆಮನೆ ಯಕ್ಷಗಾನ ಸಂಘಟಕ ಪ್ರಶಸ್ತಿಯನ್ನು ಪ್ರಮೋದ ಹೆಗಡೆ ಸಂಕಲ್ಪ ಇವರಿಗೆ ಪ್ರದಾನ ಮಾಡಲಾಗುವುದು.
ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಿ ಎಲ್ ಹೆಗಡೆ ಮಂಜುನಾಥ ಭಾಗವತರ ಕುರಿತು ಸಂಸ್ಮರಣಾ ನುಡಿಗಳನ್ನಾಡುವರು. ಸಂಜೆ 6ಕ್ಕೆ ವಾಮನ ಚರಿತ್ರೆ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
ಡಿ. 22 ರಂದು ಬೆ.10ಕ್ಕೆ ತಾಳಮದ್ದಳೆ ಶಿಬಿರ ನಡೆಯಲಿದ್ದು ಹೊಸ್ತೋಟ ಮಂಜುನಾಥ ಭಾಗ್ವತ ಉದ್ಘಾಟಿಸುವರು. ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸುವರು.
ಸಂಜೆ 4ಕ್ಕೆ ಹವ್ಯಾಸಿ ಯಕ್ಷರಂಗೋತ್ಸವ ಸನ್ಮಾನ ಮತ್ತು ಪ್ರದರ್ಶನ ನಡೆಯಲಿದ್ದು ಸಾಹಿತಿ ಶ್ರೀಧರ ಬಳಗಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಿದ್ದಾಪುರದ ಪ್ರೊ. ಎಂ ಎ ಹೆಗಡೆ, ಕುಮಟಾದ ಡಾ. ಟಿ ಟಿ ಹೆಗಡೆ, ಪ್ರಾಧ್ಯಾಪಕ ಡಾ. ಮಹೇಶ ಅಡಕೋಳಿ, ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಪಾಲ್ಗೊಳ್ಳುವರು.
ಹವ್ಯಾಸಿ ವೇಷಧಾರಿ ಎನ್ ಎಂ ಪಟಗಾರ ಬರ್ಗಿ ಇವರನ್ನು ಸನ್ಮಾನಿಸಲಾಗುವುದು. ನಂತರ ಮಾರುಕೇರಿಯ ಶ್ರೀ ಶಿವಶಾಂತಿಕಾ ಪರಮೇಶ್ವರಿ ಯಕ್ಷಗಾನ ಕಲಾಸಂಘದ ವತಿಯಿಂದ ತಾಳಮದ್ದಳೆ ನಡೆಯಲಿದೆ.
ಡಿ 23 ರಂದು ಬೆಳಗ್ಗೆ 10ಕ್ಕೆ ಪ್ರಸಂಗ ಪಠ್ಯದ ಪರಿಣಿತ ಓದು ವಿಷಯದ ಕುರಿತು ತರಬೇತಿ ನಡೆಯಲಿದೆ. ಹೊಸ್ತೋಟ ಮಂಜುನಾಥ ಭಾಗವತರು ಉಪನ್ಯಾಸ ನೀಡುವರು. ಸಂಜೆ 4ಕ್ಕೆ ಮಹಿಳಾ ಯಕ್ಷರಂಗೋತ್ಸವ ಸನ್ಮಾನ ಮತ್ತು ಪ್ರದರ್ಶನ ನಡೆಯಲಿದ್ದು ಶಾಸಕ ಮಂಕಾಳ ವೆದ್ಯ ಅಧ್ಯಕ್ಷತೆ ವಹಿಸುವರು. ಹವ್ಯಾಸಿ ಅರ್ಥಧಾರಿ ಜಾಹ್ನವಿ ಹೆಗಡೆ ಅಡೆಮನೆ ನಿಟ್ಟೂರು ಇವರನ್ನು ಸನ್ಮಾನಿಸಲಾಗುವುದು. ನಂತರ ಮಹಿಳೆಯರಿಂದ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಡಿ.24 ರಂದು ಬೆ. ಅರ್ಥಗಾರಿಕೆಯಲ್ಲಿ ಶೆಲಿ ವಿಷಯದ ಕುರಿತು ಕೆ ಜಿ ಮಂಜುನಾಥ ಪುರಪ್ಪೆಮನೆ ಉಪನ್ಯಾಸ ನೀಡುವರು. 4ಕ್ಕೆ ಬಾಲ ಯಕ್ಷರಂಗೋತ್ಸವದಲ್ಲಿ ಧನ್ಯಾ ಅಧ್ಯಕ್ಷತೆ ವಹಿಸುವರು. ನಿತಿನ್ ಎಂ ಹೆಗಡೆ ದಂಟಕಲ್ ಇವರನ್ನು ಸನ್ಮಾನಿಸಲಾಗುವುದು. ನಂತರ ಮಕ್ಕಳ ಮೇಳ ಸಾಲಿಗ್ರಾಮ ಇವರಿಂದ ಬಬ್ರು ವಾಹನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಡಿ. 25ರ ಬೆಳಗ್ಗೆ ಅರ್ಥಗಾರಿಕೆಯಲ್ಲಿ ಆಧುನಿಕ ಪ್ರಜ್ಞೆ ವಿಷಯದ ಕುರಿತು ದಿವಾಕರ ಹೆಗಡೆ ಕೆರೆಹೊಂಡ ಉಪನ್ಯಾಸ ನೀಡುವರು.
ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಭಾರತೀಯ ವಿಕಾಸ ಟ್ರಸ್ಟ್ನ ಟ್ರಸ್ಟಿ ಕೆ ಎಂ ಉಡುಪ ಅಧ್ಯಕ್ಷತೆ ವಹಿಸುವರು. ಹಿರಿಯ ಯಕ್ಷಗಾನ ಸಂಘಟಕ ಡೊಂಬೆ ಶಿವರಾಮಯ್ಯ ಇವರಿಗೆ ಕಡತೋಕಾ ಕತಿ-ಸ್ಮತಿ ಪುರಸ್ಕಾರ ನೀಡಲಾಗುವುದು.
ಸಂಜೆ 6ಕ್ಕೆ ಲವಕುಶ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಯಕ್ಷಲೋಕದ ಅಧ್ಯಕ್ಷರು ತಿಳಿಸಿದ್ದಾರೆ
ಕೃಪೆ :
http://vijaykarnataka.com
|
|
|